ಶುಕ್ರವಾರ, ಅಕ್ಟೋಬರ್ 7, 2005

ಚುಟುಕಗಳು [07/10/2005]

ನಿದ್ದೆ ನಲ್ಲೆ, ಕಳೆದೆರಡು ದಿನಗಳಿಂದ ಮಾಯವಾಗಿತ್ತು ನನ್ನ ನಿದ್ದೆ. ಕಾರಣ, ನನ್ನ ಜತೆಯಲ್ಲಿ ನೀನಿದ್ದೆ! ಅಂದು-ಇಂದು ಅಂದು : ಭಾರತವಾಗಬೇಕು ರಾಮರಾಜ್ಯ ಇಂದು : ಭಾರ - ತಾವಾಗಬೇಕು ಎಂಬ ಪುಢಾರಿಗಳ ವ್ಯಾಜ್ಯ! ಅದೃಷ್ಟ ಶ್ರೀಮತಿಯ ಕಣ್ತಪ್ಪಿಸಿ ಕ್ಲೀಶಾಳೊಡನೆ ಪಾಂಡು, ಥೇಟರಿಗೆ ಎಲ್ಲರಿಗಿಂತ ಮೊದಲೇ ಬಂದಾಗಿತ್ತು ಜನರೂ ಬರಲಿಲ್ಲ ಥೇಟರೂ ತೆರೆಯಲಿಲ್ಲ ಪಾಂಡುವಿನದೃಷ್ಟಕ್ಕಂದು 'ಬೆಂಗಳೂರು ಬಂದ್'-ಆಗಿತ್ತು!