ಶುಕ್ರವಾರ, ನವೆಂಬರ್ 25, 2005

ಸುಮ್ಮನೆ ಗೀಚಿದ್ದು

ಕನ್ನಡ ಆಡಿಯೋ.ಕಾಂ ನಲ್ಲಿ ನಡೆಯುತ್ತಿರುವ "ಕಾವ್ಯಂತ್ಯಾಕ್ಷರಿ" ಆಟದಲ್ಲಿ ಗೀಚಿದ ಹನಿಗಳಿವು. ಹಾಗೆಯೇ ಎತ್ತಿ ಇಲ್ಲಿ ಹಾಕಿದ್ದೇನಷ್ಟೇ :) ಕಾಲಾವಧಿ : ಸೆಪ್ಟೆಂಬರ್ ನಿಂದ ನವೆಂಬರ್ ೦೫ ರವರೆಗೆ ************************************* ತೊಂದರೆಯಾದೀತು ನಿಮಗೆ ನನ್ನ ಹರುಕು-ಮುರುಕು ಕಾವ್ಯಧಾರೆಯನೋದಲು ನಾನರಿಯೆ, ಅದೆಷ್ಟು ಚಂದವೋ ಈ ನನ್ನ ಕವಿತಾ-ಚೂರುಗಳು ಅದಕ್ಕೇ ಇರಬೇಕು; ನನ್ನ ಪ್ರೀತಿಯ ಕಾವ್ಯ - ಬಾಧೆಪಟ್ಟು-ಓಡಿಹೋದಳು! ************************************* ಪಶ್ಚಾತ್ತಾಪಕ್ಕೂ ಪ್ರಾಯಶ್ಚಿತ್ತಕ್ಕೂ ವ್ಯತ್ಯಾಸವಿಷ್ಟೇ ಮೊದಲದು ನೀ ಮಾಡಿದ ಕಾರ್ಯಕ್ಕೆ ನಿನಗುಂಟಾಗುವ ಮರುಕ ಎರಡನೆಯದು ನಿನಗುಂಟಾದ ಮರುಕದ ಪರಿಹಾರಕ್ಕೆ ನೀನೆಸಗುವ ಸತ್ಕಾರ್ಯ! ************************************* ಕಷ್ಟಸಾಧ್ಯವೇನಿಲ್ಲ ಮನದಿಂಗಿತವನರಿಯುವುದಕೆ ಅರಿವ ಮನಸು ಬೇಕಷ್ಟೆ ಮನದ ಮನಸು ತಿಳಿಯಲು ************************************* ಒಳಗಣ್ಣಿಗೆಲ್ಲವೂ ಗೋಚರಿಸುವಂತಿದ್ದರೆ ನಾನಾಗಿರುತ್ತಿರಲಿಲ್ಲವಿನ್ನೂ ಹುಲುಮಾನವ, ನಾ ಮಾಡಿದ-ಮಾದದಿಹ ಕೃತ್ಯಕ್ಕೆ ಉಳಿಸಿಕೊಳ್ಳಬೇಕಿದೆ ಈ ನನ್ನ ಮಾನವ! ************************************* ಕೇಳುವಂತಾಗು ನಿನ್ನ ಆತ್ಮಸಾಕ್ಷಿಯ ನುಡಿಯ ನಿನ್ನೆಲ್ಲ ಕರ್ಮಫಲಗಳ ಜಾತಕವನ್ನು ಒದರುತ್ತದದು ನಡೆ ನಿನ್ನಾತ್ಮಸಾಕ್ಷಿಯು ತೋರುವ ಹಾದಿಯಲೇ ಅದುವೆ ಸುಲಭ ದಾರಿಯು ಆತ್ಮಸಾಕ್ಷಾತ್ಕರದೆಡೆಗೆ ************************************* ಜವಾನನಾಗುವೆ ಬೇಕಿದ್ದರೆ ನಿನ್ನ ಪ್ರೀತಿಯರಮನೆಗೆ ದಿವಾನಿಯಾಗು ನೀ ನನ್ನೊಲವಿನ ಗುಡಿಸಲಲಿ ಎನ್ನ ಸಿರಿಸಂಪತ್ತೆಲ್ಲವೂ ನಿನ್ನದೇ ಎನ್ನ ಮನದನ್ನೆ ನನಗಿನ್ನೇನು ಬೇಕು ಹೇಳು ಬಳಿಯಲಿ ನೀನಿರಲು!! ************************************* ಸಿರಿವಂತ ನಾ ಕೂಡ ನನ್ನಾಕೆ ನೀಡಿದ ಮುತ್ತುಗಳ ಲೆಖ್ಖದಲಿ... ನಾವಿಬ್ಬರೂ ಕಳೆದು, ಕೂಡಿಟ್ಟ ಆ ಮಧುರ ಕ್ಷಣಗಳ ಲೆಖ್ಖದಲಿ... ************************************* ದು:ಖವೇಕೆ ಮಡುಗಟ್ಟಿಹುದು ಮೊಳಕೆಯೊಡೆದ ಬೀಜದಂತೆ? ದು:ಖ ಬೀಜವ ಬಿತ್ತಿದರೆ ಬೆಳೆದು ಹೆಮ್ಮರವಾಗುವುದು ಖಂಡಿತಾ ತನ್ನ ಬೇರು-ಬಿಳಲುಗಳಿಂದ ನಿನ್ನನೇ ಸುತ್ತುವರೆವುದು ನಿಶ್ಚಿತ ದು:ಖ ಬೀಜವ ನೀ ಮೊಳಕೆಯಲೇ ಚಿವುಟಿಬಿಡುವಂತಾದರೆ ಸಕಲವೂ ಸುಖಮಯ 'UTOPIA'ದಂತಹ ರಾಜ್ಯ - ರಾಜ ನೀ ನಿಶ್ಚಿಂತ ************************************* ಜಗದೋದ್ಧಾರನಂದು ಆಡಿಸಿದಳೆಶೋಧ ಸುಪುತ್ರನೆಂದೇ ತಿಳಿದು ದೇವಕಿಗಿಲ್ಲವಾಯ್ತು ಆ ಭಾಗ್ಯ ವಿಧಿಯಾಟವಲ್ಲವೆ ಇದು? ************************************* ಮಣ್ಣು-ಹೆಣ್ಣು-ಹೊನ್ನು ಬಿಡಲಾರೆಯಾ ನೀ ಇವುಗಳನ್ನು?? ಭವ-ಭಾರದ ಸತ್ಯವನರಿಯುವಂತಾಗು ಇಹ ಲೋಕದಿಂ ಪರಲೋಕದೆಡೆಯ ನಿನ್ನ ಪಯಣಕೆ ಅದುವೇ ನಿನ್ನ ಪರವಾನಗಿ ಪತ್ರವೆಂಬುದ ನೀ ಮರೆಯದಿರು! ************************************* ಬೇಡನಿಂದ ಹತನಾದ ಶ್ರೀ ಕೃಷ್ಣನಿಗೇನು ಗೊತ್ತಿತ್ತು ಮತ್ಸ್ಯದುದರದಲ್ಲಿದ್ದ ತನ್ನ ಸಾವಿನ ಸೂಚನೆ!! ಇರುವಷ್ಟೂ ಕಾಲ ಗೀತಭೋಧಿಸಿದಾತನಿಗೇ ಈ ಪಾಡು; ಸ್ವಾರ್ಥದ ಮೊಟ್ಟೆಯಾದ ಹುಲು ಮಾನವ ನೀನ್ಯಾವ ಲೆಖ್ಖ ಬಿಡು?? ************************************* ಬಂದು ಹೋಗುವ ಗೆಳೆಯ-ಬಳಗವೆಷ್ಟೋ ಈ ನಾಲ್ಕು ದಿನದ ಬದುಕಿನಲಿ ಭಾವನೆಗಳಿಗಿಲ್ಲಿ ಬೆಲೆಯಿಲ್ಲ ನನ್ನಾಸೆಗೆಂದೂ ಕೊನೆಯಿಲ್ಲ ಕಡೆಯನಕ ಉಳಿದದ್ದು ಮಾತ್ರ ನೀ ಉಳಿಸಿ ಹೋದ ಮುಗಿಯದ ಹುಡುಕಾಟ ************************************* ಅನ್ನ ದಾನದ ಮುಂದೆ ಇನ್ನು ದಾನವು ಇಲ್ಲ ತಾಯಿ ದೇವರ ಮುಂದೆ ಇನ್ನು ದೇವರು ಇಲ್ಲ ತುತ್ತು ಅನ್ನಕ್ಕಾಗಿಯೇ ತಾನೇ ಬಹುಕೃತ ವೇಷಗಳು ಸುತ್ತಾಡಿದ ದೇಶಗಳು ಕಲಿತಾಡಿದ ಭಾಷೆಗಳು! ************************************* ತಿಳಿಯಾದ ಮನವನು ಕದಡುವೆ ಏಕೆ? ತುತ್ತು ಅನ್ನಕ್ಕಾಗಿಯೇ ತಾನೆ ಎಲ್ಲ ಶ್ರಮ,ಪಾಡು ನೆಪ ಮಾತ್ರವೇ ಹಸಿರು ಕಾರ್ಡು ಬಿಡದಿರು ನಿನ್ನ ಬೇರಿನ ಜಾಡು ಎಂದಿಗೂ,ಎಂದೆಂದಿಗೂ ಭರತ ಭೂಮಿಯೇ - ನಿನ್ನ ತಾಯ್ನಾಡು ************************************* ವ್ರತವಲ್ಲವಿದು ಕನ್ನಡ - ಅನವರತ ಇದ ಹೇಲುವೆ ಕೇಳು ನಾ ಸುಸಂಕೃತ ಚಿಂತಿಸದಿರು ವೃಥಾ ಎಳೆ ನೀ ನಿಲ್ಲದ ಕನ್ನಡಮ್ಮನ ರಥ! ************************************* ಮಾಲೆ-ಮಾಲೆಯಾಯಿತು ಮೇಘಗಳ ಸಂಘ ಹಸಿರಾಯಿತು ಎಲ್ಲೇದೆ ಗಿರಿ-ವನ ಮಾಲೆ ಶೃಂಘ ಆ ಮೆಘಮಾಲೆಯಲೂ ನಾ ಕಂಡೆ, ಗಗನದಲ್ಲೊಂದು ಮೇಘಸಂದೇಶ - "ಕನ್ನಡವೇ ಸತ್ಯ; ಕನ್ನಡವೇ ನಿತ್ಯಾ" ************************************* ಮಂಡೂಕ ನೀನಾಗದಿರು ಈ ಜಗದ ಕೂಪದೊಳು ಮಂಡೆಯಿಂ ಬಿಸಾಕುವಂತಾಗು "ನಾನ್" - ಎಂಬ ಭಾವನೆಯ ಅದುವೇ ಸಾಕ್ಷಾತ್ಕಾರ ನಿನ್ನಿಂದಾಗಬಹುದಾದ ಜಗದುದ್ಧಾರ ************************************* ಕೈ ಹಿಡಿಯಷ್ಟೇ ನಾ ಕಂಡಿದ್ದು ಈ ಭವ ಸಾಗರದಲ್ಲಿ... ಇಲ್ಲಿ ಕಲಿವವರೂ ಕಲಿಸುವರು ಕಲಿಸುವವರೂ ಕಲಿಯುವರು ************************************* ಮೋಕ್ಷದರಮನೆಯ ಹಾದಿಯಲ್ಲಿ ನಿನ್ನ ಕರ್ಮ-ಫಲಗಳ ಮೆಟ್ಟಿಲುಗಳೆಷ್ಟೋ? ನೆನಪಿರಲಿ, ಹೆಗಲ ಮೇಲೆ ಹೊತ್ತಿರುವುದು ನಿನ್ನದೇ ಪಾಪದ ಕೊಡ! ಆತನನುಗ್ರಹವೊಂದೇ ಸಾಕು ಸ್ವಾರ್ಥ-ಸಿರಿ ಇನ್ನೇಕೆ ಬೇಕು? ************************************* ಬಾರಿಸುವಂತಾಗಲಿ ಕನ್ನಡ ಡಿಂಡಿಮ ಅದರಿಂದಲೇ ನಮಗೆಲ್ಲ ಸಂಭ್ರಮ ಸ್ಥಾವರವಾಗದಿರಲಿ ನಮ್ಮ ಭಾಷೆ ಜಗದ ಮೂಲೆ ಮೂಲೆ ಮುಟ್ಟಲು ಕನ್ನಡವೆಂದಿಗೂ ಜಂಗಮ ************************************* ಬೇಡ ಬೇಡವಿನ್ನು ಈ ಜಡ... ಮತ್ತೊಮ್ಮೆ ಬೆಳಗಲಿ... ಬೆಳೆದು ಎಲ್ಲೆಲ್ಲೂ ತನ್ನ ಕಂಪ ಬೀರುವಂತಾಗಲಿ.... ಬೇಡ ಬೇಡವಿನ್ನು ಈ ಜಡ... ಎಲ್ಲೆಡೆ ಝಗಝಗಿಸುವಂತಾಗಲಿ ನಮ್ಮ-ನಿಮ್ಮೆಲ್ಲರ ಕನ್ನಡ ************************************* ಅಲುಗದಿರೂ ಇನ್ನು ನೀ... ಇನ್ನೆರಡು ಘಳಿಗೆಯಷ್ಟೇ ಇಷ್ಟೆಲ್ಲಾ ಕಷ್ಟ-ಕಾರ್ಪಣ್ಯ ಕಂಡ ಮೂಳೆ-ಮಾಂಸದ ಮಾನವ ದೇಹಕೆ ಯಕಶ್ಚಿತ್ ಒಂದು ಹುಳುಕಲ್ಲು ಏನು ತಾನೇ ಮಾಡೀತು!! [ಪೇಶಂಟ್ ಒಬ್ಬನಿಗೆ ಡೆಂಟಿಸ್ಟರೊಬ್ಬರ ಮೊರಾಲ್‍ ಬೂಸ್ಟಿಂಗ್‍ ನುಡಿ!!] ************************************* ಮಾತನಾಡುತಿತ್ತು ಮನವಂದು ಹುಚ್ಚೆದ್ದ ಸುನಾಮಿಯಂತೆ... ಪ್ರೇಯಸಿಯ ಕಂಡಾಕ್ಷಣವದು ತನು-ಮನದಲ್ಲೆಲ್ಲವೂ ತಲ್ಲಣ...