ನೀವು ನೋಡಬಯಸುವ ಪುಟವು ಈಗ ಇಲ್ಲಿ ಲಭ್ಯವಿದೆ:
ಕಾವ್ಯ-ಕೃಷಿ
ಅಡಚಣೆಗಾಗಿ ಕ್ಷಮಿಸಿ.
The content you are looking for is now available on:
ಕಾವ್ಯ-ಕೃಷಿ
Sorry for the inconvenience.
ಶುಕ್ರವಾರ, ಮಾರ್ಚ್ 2, 2007
ಮೂಕಸಾಕ್ಷಿ
ಉಕ್ಕಿ ಉಕ್ಕಿ ಬಂದು ದಡವನ್ನು ಮುತ್ತಿಕ್ಕುತ,
ಅವಿರತವಾಗಿ ಬೇಸರವಿಲ್ಲದೇ ಏರಿಳಿಯುವ ಈ ಸಾಗರದಲೆಗಳು
ಸಾಗರದಿಂದ ಆವಿಯಾದ ಜಲವೆಲ್ಲವೂ ಮೋಡವಾಗಿ,
ಕರಗಿ ಸುರಿವಾಗ ಭೂಮಿಗೇ ಸಮಾಧಾನ ಹೇಳುವ ಈ ಮಳೆಯು
ಬರಡು ನೆಲ ಧೂಳೆಂದು ಗೊಣಗಾಡುವಾಗ,
ಇಳೆಗೆ ಮಳೆ ಬಿದ್ದ ಕೂಡಲೇ ಘಮಗುಡುವ ಈ ಒಣ ಭೂಮಿಯು
ಒಣ ಭೂಮಿಗೆ ನೀರೆರೆದು ಬೀಜ ಬಿತ್ತಾಗ,
ಬೇರು-ಬಿಳಲ ಚಾಚಿ ಭೂಮಿಯನೇ ಬಾಚಿ ತಬ್ಬುವ ಈ ಮರವು
ಮರದಾಸರೆ ಬಯಸಿ ಬಂದ ಸಕಲ ಜೀವಸಂಕುಲಗಳಿಗೂ,
ಸದಾ ಸ್ವಾಗತ ಕೋರುವ ಹಸಿರೆಲೆ-ಹಣ್ಣಿನ ಈ ಗೂಡುಗಳು
ಅಮ್ಮನ ಗೂಡೊಳಗೆ ಬೆಚ್ಚಗೆ ಮಲಗಿದ್ದು,
ಹುಟ್ಟಿದಾಕ್ಷಣ ಕಿರ್ರ್ ಎಂದು ಕೂಗಿ ಅಳುವ ಹಸನ್ಮುಖಿ ಹಸುಳೆಯು
ಸೃಷ್ಟಿಯಲ್ಲಡಗಿರುವ ಈ ದಿವ್ಯ-
ಮಾಂತ್ರಿಕ ಶಕ್ತಿಗೆ ಮೂಕಸಾಕ್ಷಿಗಳು