ವಿಪರ್ಯಾಸ
ಸರಿಯಿಲ್ಲ...ಸರಿಯಿಲ್ಲ...ಸರಿಯಿಲ್ಲ...
ದೂರವಾಣಿ ಸಿಕ್ಕುತ್ತಿಲ್ಲ...
ಕಾಗದಗಳು ತಲುಪುವುದೇ ಇಲ್ಲ...
ಎರಡು ತಿಂಗಳಿನಿಂದ ಅಪ್ಪ ಅಮ್ಮನ ಕೂಡ
ನಗುನಗುತ ಮಾತನಾಡಿದ ನೆನಪೇ ಇಲ್ಲ
ಸಂಪರ್ಕದ ಹಾದಿ ಸುಗಮವಾಗಿರಬೇಕಲ್ಲ!!
ಅಪ್ಪ-ಅಮ್ಮನ ಪ್ರೀತಿಯ ಮಾತುಗಳಿಂದ
ವಂಚಿತರಾದ ಮಕ್ಕಳೆಲ್ಲ
ಅದೇ ಊರಿನ ವೃದ್ಧಾಶ್ರಮದ ವಿರುದ್ಧ
ದಾವೆ ಹೂಡಿದ್ದಾರಂತಲ್ಲ!!!
ಸೋಮವಾರ ೧೧ ಫೆಬ್ರವರೀ ೨೦೦೮


6 ಅನಿಸಿಕೆಗಳು
super super.... thumba chnnaagidhe kavana
reflects the inner pains of a NRI boy..oLLE KavAna.
dv'gaLu malnad hudgi! :)
@Venu - kavanavannu mattomme odi, illi yavude novilla.. badalige anakavide...
ಕವಿತೆಯನ್ನು ಇವತ್ತು ಇನ್ನೊಂದ್ ಸಲ ಓದಿದೆ.. ಆವತ್ತು ಕಮೆಂಟು ಹಾಕೋಕೆ ತೋಚಿರಲಿಲ್ಲ. ಇವತ್ತು ಕವನದ ಅರಿವಾಗ್ತಾ ಇದೆ ರೀ..
ಅಂದ ಹಾಗೆ, ಇನ್ನೊಂದ್ ವಿಷಯ. ಇಲ್ಲೇ ಕಾಪಿ-ಪೇಸ್ಟ್ ಮಾಡ್ಬಿಡ್ತೀನಿ. ಈಮೈಲನ್ನೂ ಕಳ್ಸ್ತೀನಿ ಆಮೇಲೆ!
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಷಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಹೆಚ್ಚಿನ ಮಾಹಿತಿಗೆ : info@pranati.in
ಈ ಸಲ ತಪ್ಪಿಸಿಕೊಳ್ಳಬೇಡಿಪ್ಪಾ... ಚಿತ್ರಚಾಪಕ್ಕೆ ತಪ್ಪಿಸಿಕೊಂಡ ಹಾಗೆ!!
ಇಲ್ಲ ಎಂದು ತಿಳಿಯಬೇಡ
ಇದೆ ಎಂದು ತಿಳಿ :D
ಇದ್ಯಾವುದೋ ಚಲನಚಿತ್ರದಲ್ಲಿ ಕೇಳಿದ ಡೈಲಾಗು
ಹೆ ಹೆ ಹೆ - ಎಂತಿನಂತೆ ಕವನ ಸೂಪರ್ ಆಗಿದೆ :)
tumba chennagide appa
ಒಂದು ಕಮೆಂಟನ್ನು ಪೋಸ್ಟ್ ಮಾಡಿ
ಒಡನಾಡಿ ಕೊಂಡಿಗಳು
ಲಿಂಕ್ ರಚಿಸಿ