ನೀವು ನೋಡಬಯಸುವ ಪುಟವು ಈಗ ಇಲ್ಲಿ ಲಭ್ಯವಿದೆ:
ಕಾವ್ಯ-ಕೃಷಿ
ಅಡಚಣೆಗಾಗಿ ಕ್ಷಮಿಸಿ.
The content you are looking for is now available on:
ಕಾವ್ಯ-ಕೃಷಿ
Sorry for the inconvenience.
ಸೋಮವಾರ, ಜುಲೈ 14, 2008
ದುರಾದೃಷ್ಟ
ಗುಡಿಸಲು ತುಂಬಾ
ಮಸಿ ಹಿಡಿದು ಮುಕ್ಕಾದ
ಇಂಡಾಲಿಯಂ
ಪಾತ್ರೆಗಳ ಸದ್ದು-ಗದ್ದಲ
ಹಗಲಿಡೀ ನಿದ್ದೆಯಿಲ್ಲ
ಕುಡಿದ ನಶೆ : ಆರಕ್ಕೇರದು ಮೂರಕ್ಕಿಳಿಯದು
ಪಾಪ!
ಹರಕು ಚಾಪೆ ಕಾಲಿಗೂ ಸಾಲದು
ತವರ ಪಾಲಾದ ಹಿರಿಮಗಳ,
ಮೇಜುವಾನಿ ಮಾಡುವ ತಾಯಿಯ
ಜೋಡಿ
ಎಕ್ಕಡಕ್ಕೆ ಚುಚ್ಚಿಕೊಂಡ ಮೊಂಡು ಮೊಳೆ!
ಮೂಲೆಸೇರಿ ಹೇನು-ಸೀರು ಕುಕ್ಕುವ ನೆಪದಿ
ಕಂದಮ್ಮಗಳ ಮೇಲೆ ತನ್ನೆಲ್ಲ
ಕೋಪ-ತಾಪ
ತೀರಿಸಿಕೊಳ್ಳುವ ಗಂಡ ಸತ್ತ-ಹಿರಿಸೊಸೆ
ಮಾತೆತ್ತಿದರೆ ಸಾಕು
ಸೋರುವ ಮೂಗನೂ ಸೀಟದೆ
ಆಕಾಶ-ಭೂಮಿ
ಒಂದು ಮಾಡುವ ಮೊಮ್ಮಕ್ಕಳ ಹಿಂಡು!
ಗುಡ್ಲು ತೆಗೆದು ಹೊರಗೆ ಬಿಟ್ಟ ಕೋಳಿ ಪಿಳ್ಳೆಗಳೂ,
ಮೂಲೆ ಸೇರಿ ಬೂದಿಬಿಸಿಗೆ ಮೈಯೊಡ್ಡಿ ಮಲಗಿದ್ದ
ಮುದಿನಾಯಿ
ಹತ್ತದು ಹರಿಯದು;
ದಿನದೂಡಿ,ಸಂಜೆ ಮಾಡಿ
ಅರವತ್ತರೆರಡಷ್ಟರನ್ನು ಕಣ್ಣು ಕಿರಿದುಮಾಡಿ
ನೇರ
ಗಂಟಲಿಗೆ ಸುರಿದುಕೊಂಡು ಕೆಲಸಕ್ಕೆ ಬಂದಾಯ್ತು
ಮಫ್ಲರ್ ಸುತ್ತಿದ್ದ ವಾಚ್ಮನ್ ರಂಗಯ್ಯನಿಗೆ
ಇಂದೇ ಅತಿನಿದ್ದೆ,ಕನ್ನ ಕೊರೆದು ಮನೆ ದೋಚಿದರೂ
ಕಣ್ಣು
ಬಿಡಲಾಗದಷ್ಟು,ಸದ್ದಾದರೂ ಕೇಳಿಸದಷ್ಟು!