ನೀವು ನೋಡಬಯಸುವ ಪುಟವು ಈಗ ಇಲ್ಲಿ ಲಭ್ಯವಿದೆ:
ಕಾವ್ಯ-ಕೃಷಿ
ಅಡಚಣೆಗಾಗಿ ಕ್ಷಮಿಸಿ.
The content you are looking for is now available on:
ಕಾವ್ಯ-ಕೃಷಿ
Sorry for the inconvenience.
ದುರಾದೃಷ್ಟ ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ದುರಾದೃಷ್ಟ ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಸೋಮವಾರ, ಜುಲೈ 14, 2008
ದುರಾದೃಷ್ಟ
ಗುಡಿಸಲು ತುಂಬಾ
ಮಸಿ ಹಿಡಿದು ಮುಕ್ಕಾದ
ಇಂಡಾಲಿಯಂ
ಪಾತ್ರೆಗಳ ಸದ್ದು-ಗದ್ದಲ
ಹಗಲಿಡೀ ನಿದ್ದೆಯಿಲ್ಲ
ಕುಡಿದ ನಶೆ : ಆರಕ್ಕೇರದು ಮೂರಕ್ಕಿಳಿಯದು
ಪಾಪ!
ಹರಕು ಚಾಪೆ ಕಾಲಿಗೂ ಸಾಲದು
ತವರ ಪಾಲಾದ ಹಿರಿಮಗಳ,
ಮೇಜುವಾನಿ ಮಾಡುವ ತಾಯಿಯ
ಜೋಡಿ
ಎಕ್ಕಡಕ್ಕೆ ಚುಚ್ಚಿಕೊಂಡ ಮೊಂಡು ಮೊಳೆ!
ಮೂಲೆಸೇರಿ ಹೇನು-ಸೀರು ಕುಕ್ಕುವ ನೆಪದಿ
ಕಂದಮ್ಮಗಳ ಮೇಲೆ ತನ್ನೆಲ್ಲ
ಕೋಪ-ತಾಪ
ತೀರಿಸಿಕೊಳ್ಳುವ ಗಂಡ ಸತ್ತ-ಹಿರಿಸೊಸೆ
ಮಾತೆತ್ತಿದರೆ ಸಾಕು
ಸೋರುವ ಮೂಗನೂ ಸೀಟದೆ
ಆಕಾಶ-ಭೂಮಿ
ಒಂದು ಮಾಡುವ ಮೊಮ್ಮಕ್ಕಳ ಹಿಂಡು!
ಗುಡ್ಲು ತೆಗೆದು ಹೊರಗೆ ಬಿಟ್ಟ ಕೋಳಿ ಪಿಳ್ಳೆಗಳೂ,
ಮೂಲೆ ಸೇರಿ ಬೂದಿಬಿಸಿಗೆ ಮೈಯೊಡ್ಡಿ ಮಲಗಿದ್ದ
ಮುದಿನಾಯಿ
ಹತ್ತದು ಹರಿಯದು;
ದಿನದೂಡಿ,ಸಂಜೆ ಮಾಡಿ
ಅರವತ್ತರೆರಡಷ್ಟರನ್ನು ಕಣ್ಣು ಕಿರಿದುಮಾಡಿ
ನೇರ
ಗಂಟಲಿಗೆ ಸುರಿದುಕೊಂಡು ಕೆಲಸಕ್ಕೆ ಬಂದಾಯ್ತು
ಮಫ್ಲರ್ ಸುತ್ತಿದ್ದ ವಾಚ್ಮನ್ ರಂಗಯ್ಯನಿಗೆ
ಇಂದೇ ಅತಿನಿದ್ದೆ,ಕನ್ನ ಕೊರೆದು ಮನೆ ದೋಚಿದರೂ
ಕಣ್ಣು
ಬಿಡಲಾಗದಷ್ಟು,ಸದ್ದಾದರೂ ಕೇಳಿಸದಷ್ಟು!