ಭಾನುವಾರ, ಅಕ್ಟೋಬರ್ 26, 2008

ಹೀಗೆರಡು ಕಿರುಗವಿತೆಗಳು...

ಸಂಜೆ ಆರರ ಸಮಯ ಹಕ್ಕಿ ಹಿಂಡಿಗೆ ಗೂಡು ಸೇರುವ ತವಕ ರೆಕ್ಕೆ ಬಲಿತ ಮರಿಹಕ್ಕಿಗೆ ತನ್ನಮ್ಮನೊಡನೆ ತಾನೂ ಹಾರುವ ಪುಳಕ ಸಾಕಿಸಲಹಿ ಹಾರಲು ಕಲಿಸಿ,ಕಲಿತ ಹಕ್ಕಿ ಹಾಗೂ ಮರಿಯ ಜನುಮ ಸಾರ್ಥಕ ಪಾರ್ಕಿನಲಿ ಕೂತು ಹಾರಿಹೋದ ಮರಿಯನ್ನೇ ದಿಟ್ಟಿಸುತ್ತಿದ್ದ ಅಜ್ಜ-ಅಜ್ಜಿಯ ಮುಖದಲಿ ಮೂಡಿದ ಭಾವ ಮಾತ್ರ - ಪ್ರಶ್ನಾರ್ಥಕ! * * * * * * * * * * * * * * * * Chennaiನಲ್ಲಿ ಭಾರೀ ಮಳೆ ಬೆಂಗಳೂರೇನೂ ಹೊರತಲ್ಲ ಈ ಕಾಲದಲಿ ಮಳೆ,ಆಶ್ಚರ್ಯವೆ? ಸಧ್ಯದ ಆರ್ಥಿಕ ಬಿಕ್ಕಟ್ಟಿನ ಈ ಪರಿಸ್ಥಿತಿಯಲ್ಲಿ ನಮ್ಮೆಲ್ಲರಂತೆ ಪ್ರಕೃತಿಯೂ Depressionಗೆ ಒಳಗಾಗಿದ್ದು ಸಹಜವೇ